ವಿಸ್ಮಯ ವಿಶ್ವ-೧ / Vismaya Vishwa 1
ಮಿಲನಿಯಮ್ ೧೩ / Millennium 13
-
- $3.99
-
- $3.99
Publisher Description
About the Book
ಈವರೆಗೆ ಬಂದಿರುವ ಮಿಲನಿಯಮ್ ಸರಣಿ ಪುಸ್ತಕಗಳು,
ಮಿಲನಿಯಮ್ ೧ – “ಹುಡುಕಾಟ”
ಮಿಲನಿಯಮ್ ೨ – “ಜೀವನ ಸಂಗ್ರಾಮ”
ಮಿಲನಿಯಮ್ ೩ – “ಪೆಸಿಫಿಕ್ ದ್ವೀಪಗಳು”
ಮಿಲನಿಯಮ್ ೪ – “ಚಂದ್ರನ ಚೂರು”
ಮಿಲನಿಯಮ್ ೫ – “ನೆರೆಹೊರೆಯ ಗೆಳೆಯರು”
ಮಿಲನಿಯಮ್ ೬ – “ಮಹಾಯುದ್ಧ - ೧”
ಮಿಲನಿಯಮ್ ೭ – “ಮಹಾಯುದ್ಧ - ೨”
ಮಿಲನಿಯಮ್ ೮ – “ಮಹಾಯುದ್ಧ - ೩”
ಮಿಲನಿಯಮ್ ೯ – “ದೇಶ ವಿದೇಶ - ೧”
ಮಿಲನಿಯಮ್ ೧೦ – “ದೇಶ ವಿದೇಶ - ೨”
ಮಿಲನಿಯಮ್ ೧೧ – “ದೇಶ ವಿದೇಶ - ೩”
ಮಿಲನಿಯಮ್ ೧೨ – “ದೇಶ ವಿದೇಶ - ೪”
ಮಿಲನಿಯಮ್ ೧೩ – “ವಿಸ್ಮಯ ವಿಶ್ವ-೧”
About the Author
“ಜಗತ್ತಿನಲ್ಲಿ ಯಾವುದೂ ಜಡವಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೆಲವು ಆಶಯ. ವ್ಯಕ್ತಿ ವಿಶಿಷ್ಠ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತಾ ಬೆಳೆಯುತ್ತದೆ. ತಮ್ಮ ಜೀವನಾನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ವುಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರು.
ಅವರ ಬದುಕು ಸರಳ ಹಾಗೂ ನೇರ ವ್ಯಕ್ತಿತ್ವದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ತೇಜಸ್ವಿ ಅವರ ಬರಹ, ಆಸಕ್ತಿ, ಅವರ ಬದುಕಿನ ರೀತಿ, ಬದುಕಿನ ಬಗೆಗೆ ಮನಸೋತು; ಆಕರ್ಶಿತರಾಗಿ; ಅವರಂತೆ ಬದುಕಬೇಕು; ಎಂದು ಹಂಬಲಿಸುವವರು ಅಸಂಖ್ಯ.
ಇಪ್ಪತ್ತನೇ ಶತಮಾನದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಬದುಕ್ಕಿದ್ದು ಕೇವಲ ಅರವತ್ತೊಂಭತ್ತು (69) ವರ್ಷ್ ಗಳು ಮಾತ್ರ [1938-2007]. ಅವರ ಸಾವು ಅಸಂಖ್ಯ ಸಾಹಿತ್ಯ ಪೇಮಿಗಳನ್ನು ಕೊರಗಿನಲ್ಲಿಟ್ಟಿದೆ. ಆದರೆ ಅವರ ಬದುಕು, ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮ ಬದುಕಿನ ಭಾಗವಾಗುತ್ತಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನ ಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ; ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಸಾಹಿತ್ಯ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ, ಸಂಗೀತ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಳಕೆ ಹಾಗೂ ಅದರಿಂದ ಪುಸ್ತಕ ಪಬ್ಲಿಷಿಂಗ್, ಅಡುಗೆ... ಹೀಗೆ ಹತ್ತು-ಹಲವು ಅವರ ಆಸಕ್ತಿ, ಅಭಿರುಚಿಗಳಾಗಿದ್ದವು. ಹಾಗಾಗಿ “ತೇಜಸ್ವಿ” ಎಂದರೆ ಒಂದು ವಿಸ್ಮಯ, ನಿಗೂಢ, ಮಾಯಾಲೋಕ!
* * *