![Samadhihotlu mattu itara kathegalu](/assets/artwork/1x1-42817eea7ade52607a760cbee00d1495.gif)
![Samadhihotlu mattu itara kathegalu](/assets/artwork/1x1-42817eea7ade52607a760cbee00d1495.gif)
![](/assets/artwork/1x1-42817eea7ade52607a760cbee00d1495.gif)
![](/assets/artwork/1x1-42817eea7ade52607a760cbee00d1495.gif)
Samadhihotlu mattu itara kathegalu
-
- $1.99
-
- $1.99
Publisher Description
ಪ್ರಕಾಶಕರ ನುಡಿ
ಮದುವೆಮಾಡಿದ್ರೆ ಹುಡ್ಗುಬುದ್ಧಿ ಹೋಗತ್ತೆ, ಜವಾಬ್ದಾರಿಬರತ್ತೆ, ಸರಿಹೋಗ್ತನೆ ... ಹೀಗೆ ಹಲವು ಅಭಿಪ್ರಾಯಗಳಿರುತ್ತವೆ ಗಂಡುಮಕ್ಕಳನ್ನು ಹೆತ್ತವರಲ್ಲಿ ಮತ್ತು ಸುತ್ತಮುತ್ತಲವರಿನಲ್ಲಿ. ಹುಡ್ಗುಬುದ್ಧಿ, ಜವಾಬ್ದಾರಿ, ಸರಿಹೋಗ್ತನೆ – ಹಾಗಂದ್ರೇನು?
ಹಣ ಸಂಪಾದನೆಯ ಹಂಗನ್ನು ಬಿಟ್ಟು ಪೋಲಿ ತಿರುಗುತ್ತ ಅಂಡಲೆಯುವವನನ್ನು ಹಾಗನ್ನೋದರಲ್ಲಿ ತಪ್ಪಿಲ್ಲ. ಅದೇ ಒಬ್ಬ ವಯಸ್ಸಿಗೆ ಬಂದ ಹುಡುಗ ಹಣ ಸಂಪಾದನೆಯ ಹಂಗಿಲ್ಲದೆ ಕಥೆ ಕವನ ಬರೆಯುವವನಾಗಿದ್ದರೆ ಹಾಗೆನ್ನುವುದು ತುಂಬಾ ದೊಡ್ಡ ತಪ್ಪು. ಹೇಗೆ ಮದುವೆ ಮಾಡಿ ‘ಪೋಲಿ’ ತಿರುಗುವುದನ್ನು ಕೊಲ್ಲುತ್ತಾರೋ ಅದೇ ರೀತಿ ‘ಮದುವೆ’ಯ ನೆಪದಲ್ಲಿ ವ್ಯಕ್ತಿಯ ಕ್ರಿಯಾಶೀಲತೆಯನ್ನೇ ಕೊಲ್ಲಲವಣಿಸುವ ಜನರೂ ಅಧಿಕವಾಗಿರುವುದು ಸಮಾಜದ ದೌರ್ಭಾರ್ಗ್ಯ.
ಇಂಥ ಬರ್ಭರ ಹತ್ಯೆಗಳನ್ನು ತಡೆಯೋ ಉದ್ದೇಶದಿಂದ ಈ ಪುಸ್ತಕ ಹೊರತರುತ್ತಿದ್ದೇವೆ. ಈ ಪುಸ್ತಕದ ಲೇಖಕ ಡಾ.ಅಶೋಕ್.ಕೆ.ಆರ್ ರವರ ಮದುವೆಯ ಸಂದರ್ಭದಲ್ಲಿ ಅವರ ಲೇಖನಿಯಲ್ಲಿ ಮೂಡಿಬಂದಿರುವ ವಿವಿಧಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿರುವ ಈ ಕಥಾಸಂಕಲನವನ್ನು ಹೊರತಂದು ಅವರ ಸಂಸಾರದ ಜವಾಬ್ದಾರಿಯ ಜೊತೆಜೊತೆಗೆ ಅವರೊಳಗಿನ ಬರಹಗಾರನ ಮೇಲೂ ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೊರಿಸುತ್ತಿದ್ದೇವೆ.
ಡಾ.ಅಶೋಕ್.ಕೆ.ಆರ್ ರವರು ನಿರಂತರವಾಗಿ ಬರೆಯಲಿ, ಬರಹಗಾರನಾಗಿ ಬಹುಎತ್ತರಕ್ಕೆ ಬೆಳೆಯಲಿ.
- S Abhi Hanakere